ನಾಡಿನ ದಿಗ್ಗಜ, ಹರಿದಾಸ ಸಾಹಿತ್ಯದ ಶಿರೋಮಣಿ, ದಾಸ ಸಾಹಿತ್ಯ ಪರಂಪರೆಯ ಆಧುನಿಕ ಪಿತಾಮಹ, ವಿದ್ಯಾ ವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ರವರ ದಿವ್ಯ ಸಮಕ್ಷಮ ಮತ್ತು ಸಾನಿಧ್ಯದಲ್ಲಿ ನಿನ್ನೆ ಸಂಜೆ, 5ನೇ ಏಪ್ರಿಲ್, 2025 ರಂದು ಸುಮ, ನಾಗೇಶ ಅವರ ಮನೆಯಲ್ಲಿ ನಡೆದ ಪ್ರಸನ್ನ ವೀರಾಂಜನೇಯ ಯೋಗಕೇಂದ್ರವು ಆಯೋಜಿಸಿದ್ದ ವಿಷ್ಣು ಸಹಸ್ರನಾಮ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಮತ್ತು ಸತ್ಸಂಗದ ಅನುಭಾವದಿಂದ ಮೂಡಿಬಂತು.
ಕಾರ್ಯಕ್ರಮದ ಪ್ರಾರಭದಲ್ಲಿ ನಾಗೇಶ ಅವರು ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ಭಕ್ತಿ ಪೂರ್ವಕವಾಗಿ ವಂದಿಸುತ್ತಾ, ಅವರನ್ನೂ ಗುರೂಜಿಯವರಿಗೆ ಬೆಂಬಲಿಸುತ್ತಿರುವ ಶ್ರೀಮತಿ ಮಂಗಳಾ ಭಾಸ್ಕರ್ ಅವರನ್ನೂ ಮತ್ತು ಹಾಜರಿದ್ದ ಸುಮಾರು 50 ಯೋಗ ಮಿತ್ರರನ್ನು ಸಭೆಗೆ ಆಗಮಿಸಿದರು.
ನಾಗೇಶರು ಔಪಚಾರಿಕವಾಗಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಯವರನ್ನು ಪರಿಚಯಿಸುತ್ತಾ, ಹರಿದಾಸ ಸಾಹಿತ್ಯವನ್ನು ವಿಶಾಲವ್ಯಾಪ್ತಿಯಲ್ಲಿ ಪಸರಿಸುತ್ತಿರುವ ಅಪಾರ ಸೇವೆಯನ್ನು ಸ್ಮರಿಸಿದರು; ಅವರು ವಿಶ್ವದಾದ್ಯಂತ ನೀಡಿರುವ ಒಟ್ಟಾರೆ ಪ್ರವಚನಗಳ ಸಂಖ್ಯೆ 4000ವನ್ನು ಮೀರಿವೆ. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗಳಿಸಿರುವ ಗುರೂಜಿಯವರು ಎಂ.ಇ.ಎಸ್. ಕಾಲೇಜಿನ ಪ್ರಾಧ್ಯಾಪಕರಾಗಿ ೨೮ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಂತರ ಸ್ವಯಂ ನಿವೃತ್ತಿ ಪಡೆದರು. ಅವರು ಹಲವಾರು ಪ್ರತಿಷ್ಠಿತ ಮ್ಯಾನೇಜ್ ಮೆಂಟ್ ಇನ್ಸ್ಟಿಟ್ಯೂಟುಗಳಂತಹ ಅನೇಕ ಸಂಸ್ಥೆಗಳಿಗೆ ಸಲಹೆಗಾರರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ, ಆಹ್ವಾನಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ| ಅರಳುಮಲ್ಲಿಗೆ ಪಾರ್ಥಸಾರಥಿಯವರು ನಲವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಧ್ವನಿ ಸುರುಳಿ, ಮತ್ತು ಸಿ.ಡಿ.ಗಳ ಮೂಲಕವೂ ಹರಿದಾಸ ಸಾಹಿತ್ಯವೇ ಅಲ್ಲದೆ ಭಾಗವತ, ಭಗವದ್ಗೀತೆ, ರಾಮಾಯಣ ವಿಷ್ಣುಸಹಸ್ರನಾಮ, ಚಕ್ರ ಶಾಸ್ತ್ರ ಮುಂತಾದ ಮೌಲ್ಯಗಳು ಜನಸಾಮಾನ್ಯರಿಗೆ ತಲುಪುವಂತೆ ಶ್ರದ್ಧಾಪೂರ್ವಕವಾದ ಕಾಯಕ ಮಾಡುತ್ತಾ ಬಂದಿದ್ದಾರೆ. ಅವರಿಗೆ ‘ವಿದ್ಯಾವಾಚಸ್ಪತಿ’, ‘ದಾಸ ಸಾಹಿತ್ಯ ಪ್ರದ್ಯುಮ್ನ’ ಮುಂತಾದ ಅನೇಕ ಬಿರುದು ಗೌರವಗಳನ್ನು ಸಂದಿದೆ; ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿರುತ್ತಾರೆ. ಪರಿಚಯ ಮುಂದುವರೆಸುತ್ತಾ, ಶ್ರೀ ಪಾರ್ಥಸಾರಥಿಯವರು ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ 19/03/2022 ಮತ್ತು 13/08/2023 ರಂದು ಪ್ರವಚನ ನೀಡಿ ಯೋಗ ಬಂಧುಗಳಿಗೆ ಉತ್ತಮ ಮಾರ್ಗದರ್ಶನ ನೀಡಿದ ಸಂದರ್ಭಗಳನ್ನು ವಂದನಾಪೂರ್ವಕವಾಗಿ ಸ್ಮರಿಸಿದರು.
ವಾಗ್ಮಿ ಶ್ರೀ ಪಾರ್ಥಸಾರಥಿಯವರ ಮಾರ್ಗದರ್ಶನದಂತೆ, ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ್ ಫೆಡರೇಷನ್ ಇದರ
ಖಜಾಂಚಿ ಆಗಿರುವ ಶ್ರೀಮತಿ ಮಂಗಳಾ ಭಾಸ್ಕರ್ ಅವರು ಸುಶ್ರಾವ್ಯ ಕಂಠದಿಂದ ಮಾಡಿದ ಪಾರಾಯಣಕ್ಕೆ ಸಭಿಕರೆಲ್ಲರೂ ಜೊತೆಗೂಡಿದರು.
ತದನಂತರ, ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿಯವರು ವಿಷ್ಣು ಸಹಸ್ರನಾಮದ ಉಗಮದ ಬಗ್ಗೆ ತಿಳಿಸುತ್ತಾ, ಮಹಾಭಾರತದ ಅನುಶಾಸನ ಪರ್ವದಲ್ಲಿ ವಿಷ್ಣು ಸಹಸ್ರನಾಮವು ಹುಟ್ಟಿಕೊಂಡಿತು, ಅಲ್ಲಿ ಭೀಷ್ಮನು ತನ್ನ ಬಾಣಗಳ ಹಾಸಿಗೆಯ ಮೇಲೆ ಯುಧಿಷ್ಠಿರನಿಗೆ ಇದನ್ನು ಹೇಳಿದನು. ವಿಷ್ಣುವಿನ ಸಾವಿರ ಹೆಸರುಗಳನ್ನು ಹೊಂದಿರುವ ವಿಷ್ಣು ಸಹಸ್ರನಾಮವು ಸಾಂಪ್ರದಾಯಿಕವಾಗಿ ಮಹಾಭಾರತ ಮತ್ತು ಭಗವದ್ಗೀತೆಯ ಕರ್ತೃವಾದ ವ್ಯಾಸ ಋಷಿಗೆ ಸೇರಿದೆ ಎಂದು ಹೇಳಲಾಗುತ್ತದೆ, ಎಂದರು. ವಿಷ್ಣು ಸಹಸ್ರನಾಮವನ್ನು ನಿಯಮಿತವಾಗಿ ಪಠಿಸುವುದರಿಂದ ಜನರಲ್ಲಿ ಅಡೆತಡೆಗಳ ನಿವಾರಣೆ, ನಕಾರಾತ್ಮಕ ಪ್ರಭಾವಗಳನ್ನು ತಗ್ಗಿಸಿ, ಏಕಾಗ್ರತೆ, ಶಾಂತಿಯನ್ನು ಉತ್ತೇಜಿಸಿ, ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಬೆಳೆಸುವುದರಲ್ಲಿ ಸಹಾಯಮಾಡುತ್ತದೆ. ಹಾಗೆಯೇ. ವಿಷ್ಣು ಸಹಸ್ರನಾಮದಲ್ಲಿ ಪ್ರತಿ ಪದಕ್ಕೆ ನೂರು ಗುಣ, ಧರ್ಮ ಪುಣ್ಯಗಳಿವೆ, ಅದರ ಜಪ ನೂರು ಫಲ ನೀಡುತ್ತದೆ. ಶ್ರೀ ವಿಷ್ಣು ಸಹಸ್ರನಾಮದಲ್ಲಿ ಉಲ್ಲೇಖವಾಗಿರುವ ಕೆಲವು ಶ್ಲೋಕಗಳ ಭಾವಾರ್ಥ ಹಾಗೂ ತಾತ್ಪರ್ಯಗಳನ್ನು ತಿಳಿಸುತ್ತಾ, ವಿಷ್ಣುಸಹಸ್ರನಾಮ ಅದೃಷ್ಟ ತಂದುಕೊಡುತ್ತದೆ, ಜನರ ಮನಸ್ಸಿನಮೇಲೆ ಉತ್ತಮ ಪರಿಣಾಮ ಆಗುತ್ತದೆ; ಹಾಗೂ ಈ ವಿಶಿಷ್ಟ ಶ್ಲೋಕ-ಪಠಣದಿಂದ ಉಂಟಾಗುವ ಕಂಪನಗಳು ಜನರಿಗೆ ಚೈತನ್ಯ ನೀಡುತ್ತದೆ ಎಂದು ವಿಶ್ಲೇಶಿಸುತ್ತಾ, ಭಕ್ತರು ಕಂಡುಕೊಂಡ ಮಹತ್ವದ ಪವಾಡ ಸದೃಶ ಅನುಭವಗಳನ್ನು ಪಾರ್ಥಸಾರಥಿ ಗುರುಗಳು ಯೋಗಮಿತ್ರರೊಂದಿಗೆ ಹಂಚಿಕೊಂಡರು.
ಗುರುಗಳು ಸಂಸ್ಥಾಪಿಸಿರುವ ‘ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ್ ಫೆಡರೇಷನ್’ ಕಳೆದ ಒಂದು ದಶಕಗಳ ಕಾಲ ವಿಶ್ವದಾದ್ಯಂತ ವಿಷ್ಣುಸಹಸ್ರನಾಮ ಪಸರಿಸುತ್ತಿದ್ದು, ಸಂಸ್ಥೆಯ ಅದ್ದೂರಿ ದಶಮಾನೋತ್ಸವ ಹಾಗೂ ವಿಷ್ಣುಸಹಸ್ರನಾಮ ಸಮಾವೇಶ 26 ಮತ್ತು 27 ಏಪ್ರಿಲ್ ಬೆಂಗಳೂರಿನಲ್ಲಿ ನಡೆಯಲಿದ್ದು, ನೆರೆದಿದ್ದ ಮಿತ್ರರಿಗೆಲ್ಲರಿಗೂ ಎರಡೂ ಕಾರ್ಯಕ್ರಮಗಳಿಗೆ ಶ್ರೀ ಪಾರ್ಥಸಾರಥಿಯವರು ಆಹ್ವಾನ ನೀಡಿದರು. ನಾಗೇಶ ಅವರು ಬಂದ ಮಿತ್ರರಿಗೆಲ್ಲರಿಗೂ ಈ ಕಲಾಪಗಳಿಗೆ ಭಾಗವಹಿಸಿ, ಗುರುಗಳ ಈ ಘನ ಕಾರ್ಯದಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿಕೊಂಡರು. ಇದೇ ಸಂದರ್ಭದಲ್ಲಿ, ಪ್ರಸನ್ನ ವೀರಾಂಜನೆಯ ಸೇವಾ ಟ್ರಸ್ಟ್ ವತಿಯಿಂದ ಇಂದು 45 ಅನಾಥ ಮಕ್ಕಳಿಗೆ ವಸತಿ, ಊಟ ಮತ್ತು ವಿದ್ಯಾಭ್ಯಾಸ ನೀಡುತ್ತಿರುವ ‘ಬಾಂಧವ್ಯ ಸೇವಾಶ್ರಮ’ ಸಂಸ್ಥೆಗೆ ರೂ.15,000 ಗಳ ಧನ ಸಹಾಯಮಾಡಿದ ವಿಚಾರವನ್ನು ತಿಳಿಸಿದರು.
ಸಭಿಕರೊಬ್ಬರಾದ ಶ್ರೀಮತಿ ಭಾರತಿಯವರು ವಿಷ್ಣುಸಹಸ್ರನಾಮವನ್ನು ನಿರಂತರವಾಗಿ ಹೇಳಿಕೊಂಡಿದ್ದರಿಂದ ತಮಗಾದ ಪ್ರಭಾವ ಮತ್ತು ಪರಿಣಾಮವನ್ನು ತಿಳಿಸಿದರು. ಉತ್ತಮ ಕಾರ್ಯಕ್ರಮ ನಡೆಸಿಕೊಟ್ಟ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಮತ್ತು ಶ್ರೀಮತಿ ಮಂಗಳಾ ಭಾಸ್ಕರ್ ಅವರಿಗೆ ವಂದನಾರ್ಪಣೆ ತಿಳಿಸಿ ಶ್ರೀಮತಿ ಸುಮ ಹಾಗೂ ಶ್ರೀ ಪ್ರಸನ್ನ ಕುಮಾರ್ ಅವರು ಮಾತನಾಡಿದರು.
ಸತ್ಸಂಗ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗದೊಂದಿಗೆ ಸಂಪನ್ನವಾಯ್ತು.